Thursday, July 30, 2020

ಅಮೃತ ಸಿಂಚನ - ಅಧ್ಯಾಯ 3

ವ್ಯಕ್ತಿಯನ್ನು ಯಶಸ್ಸಿನ ಶಿಖರಕ್ಕೇರಿಸುವ,
ಅಥವಾ ನೋವಿನ ಪಾತಾಳಕ್ಕೆ ನೂಕುವ
ಎರಡೂ ಸಾಮರ್ಥ್ಯ ಸ್ನೇಹಕ್ಕಿದೆ
ಸ್ನೇಹ ಸಂಬಂಧವನ್ನು ಚಿರಕಾಲ ಉಳಿಸುವ
ಜವಾಬ್ದಾರಿ ನಮ್ಮ ಕೈಯಲ್ಲಿದೆ
ಸ್ನೇಹದ ಪರಿಚಯ ಸಮಯಾಧಾರಿತವಾದರೆ
ಸ್ನೇಹ ಸಂಬಂಧದ ನಿಶ್ಚಲತೆ ಗುಣಾಧಾರಿತವಾಗಿದೆ
ಹೃದಯ ಸೌಂದರ್ಯದ ತಳಹದಿಯ ಮೇಲೆ
ರಕ್ತ ಸಂಬಂಧ ಮೀರಿ ಬೆಳೆಯುವ
ಪವಿತ್ರ ಬೆಸುಗೆಯಿದು ಸ್ನೇಹ
ಸಂಕಷ್ಟದಲ್ಲಿ ಹೆಗಲು ನೀಡುವ
ದುಃಖದಲ್ಲಿ ಕಂಬನಿ ಒರೆಸುವ
ನಮ್ಮ ನಗುವಿನೊಳಗೆ ಮುಗುಳ್ನಗುವ
ಅವಿನಾಭಾವ ಸಂಬಂಧದ ಹೆಸರೇ ಸ್ನೇಹ
                                      - ಒಂದೊಳ್ಳೆ ಮಾತು




No comments: