Wednesday, September 23, 2020

ಅಮೃತ ಸಿಂಚನ - ಅಧ್ಯಾಯ 15

ಮಕ್ಕಳಿಗಾಗಿ ಹಣ ಆಸ್ತಿಯನ್ನು
ಕೂಡಿಡುವುದಕ್ಕಿಂತ
ಅವರನ್ನೇ ಆಸ್ತಿಯೆಂಬಂತೆ 
ಪ್ರೀತಿಸುವುದು ಉತ್ತಮ........
ಕೂಡಿಟ್ಟ ಆಸ್ತಿಯ ಹಿಂದೆ ಓಡದೆ
ವಾತ್ಸಲ್ಯದ ಆಸ್ತಿಯನ್ನು ಮರೆಯದೆ
ಸದಾ ಹೃದಯ ಶ್ರೀಮಂತರಾಗಿರುತ್ತಾರೆ.....

ಅಮೃತ ಸಿಂಚನ

ಸಂಗೀತ ಮತ್ತು ಬರವಣಿಗೆಗೆ
ಮನಸ್ಸಿನ ನೋವನ್ನು ಸಂತೈಸುವ ಶಕ್ತಿಯಿದೆ


💖ರಾಧೇ ಕೃಷ್ಣ💖

ಹೃದಯದ ಬಾಗಿಲ

ತಟ್ಟಿ ನೀ ಹೋದರೆ

ರಾಧೆಯ ಮನಸ್ಸು ಭಾರ

ಕಾಣದ ಕನಸನ್ನು 

ಕೊಟ್ಟು ನೀ ಹೋದರೆ

ವಾಸ್ತವ ಬದುಕು ದೂರ

ಹುಡುಕುವ ಕಂಗಳು 

ಕಾಣದೆ ಹೋದರೆ

ಕಣ್ಧಾರೆಯೇ ಸಾಗರ

ಕೇಳುವ ಕಿವಿಗಳು

ಆಲಿಸದೇ ಹೋದರೆ

ಕೊಳಲದನಿಯ ಸಾರ

ಪ್ರೀತಿಯ ಸ್ಫೂರ್ತಿ 

ನೀ ಕಣ್ಮರೆಯಾದರೆ 

ಮನದಾಳದಲ್ಲಿ ಅಂಧಕಾರ 

ಮನ ಮೋಹಕ ಕೃಷ್ಣ 

ನೀ ದೂರವಾದರೆ 

ವಿಧಿಯಾಟ ಬಲು ಕ್ರೂರ

                               - ಬರಹಗಾರರ ಕಾಲ್ಪನಿಕ ಸಾಲುಗಳು






Saturday, September 12, 2020

ಪೊಣ್ಣು ಬಾಲೆ - ತುಳು ಸಾಹಿತ್ಯ

 ಬದುಕ್ ಪನ್ಪಿ ಬಾನೊಡ್

ಬೊಳ್ಳಿ ಬೊಲ್ಪು ಮೂಡುಂಡ್ 

ತೆಲಿಕೆದ ಬೊಳ್ಳಿಳೆ ದಂಡ್ 

ಪೊರ್ಲು ತೊಟ್ಟಿಲ್ ತೂಗುಂಡ್ 


ಬಂಗಾರ್ದ ಕೊರಳ್ 

ದೇವರ್ ಕೊರ್ತಿ ಮಗಳ್ 

ತೆಲಿಕೆದಿಂಜಿ ಮೋನೆನೇ ಪೊರ್ಲು 

ಕಾರ್ದ ಗೆಜ್ಜೆ ನಾದದ ಕೊಳಲ್ 


ಮೋಕೆದಿಂಜಿ ಕಡಲ್ 

ಬರ್ಸ ಪನಿತ ಮುಗಲ್ 

ತಂಪಾಂಡ್ ಭೂಮಿದ ಉಡಲ್ 

ಕಣ್ಣ ತೆಲಿಕೆಗ್ ಯಾನಾಯೆ ಮರ್ಲ್ 


ತೊದಲೊಂದೊಂಜಿ ಪಾತೆರಾ 

ಎಲ್ಯ-ಎಲ್ಯ ಹೆಜ್ಜೆ ದೀಪಿ ಐಸಿರಾ 

ಮಾಜೊಂದುಂಡು ಬೇಸರಾ 

ಪೊಣ್ಣು ಬಾಲೆ ಇಲ್ಲಗ್ ನೇಸರಾ




A Good Teacher - ಇಂಗ್ಲೀಷ್ ಸಾಹಿತ್ಯ

 A Good Teacher

Guiding Star Forever

Shares the Knowledge

Gives Goal Attaining Courage

Knowledge Is An Ocean Pearl

No One Can Ever Steal

Hardwork Is Only The Way

Teacher Spreads The Confidence Ray

Happy With Student's Success

Guides To Overcome Failures

Adds Value To The Life

Guiding Star In Everyone's Life

                                    


Humanity - ಇಂಗ್ಲೀಷ್ ಸಾಹಿತ್ಯ

On This Beautiful Earth

Born With The Precious Gift

Humanity Is The Crown of Human Being

Which Will Uplifts Human Values

The Loss Of Which Always Questions 

The Reliability Of The Self Identity

Modernity Should Not Grab Humanity

It Is Not The One To Show Off

But To Console The Soul of Others

Never Think Of Give And Take Policy

But Always Aim At Soul Satisfaction

Humane Person Is The Happy Person 



Sunday, August 30, 2020

ಅಮೃತ ಸಿಂಚನ - ಅಧ್ಯಾಯ 14

 ಗೆಲುವು ಆತ್ಮ ಸಂತೃಪ್ತಿ ಹುಟ್ಟಿಸಬೇಕೇ

ಹೊರತು ಅಹಂಕಾರವನ್ನಲ್ಲ.

ಸೋಲು ಆತ್ಮ ಸ್ಥೈರ್ಯ ಹೆಚ್ಚಿಸಬೇಕೇ 

ಹೊರತು ನಕಾರಾತ್ಮಕ ಯೋಚನೆಗಳನ್ನಲ್ಲ.

ಅಮೃತ ಸಿಂಚನ - ಅಧ್ಯಾಯ 13

 ನಮ್ಮ ಬದುಕಲ್ಲಿ ಪ್ರವೇಶ ಬಯಸುವ

ಪ್ರತಿಯೊಂದು ವಸ್ತು ಅಥವಾ ವ್ಯಕ್ತಿಯನ್ನು

ಕಾಲವೇ ನಿರ್ಧರಿಸುವುದು.

ಆದರೆ ಮನಸ್ಸಿಗೆ ಎಷ್ಟು ಹಿತವರೆಂಬುದನ್ನು

ಗುಣ ಮತ್ತು ಸ್ವಭಾವ ನಿರ್ಧರಿಸುವುದು



ಅಮೃತ ಸಿಂಚನ - ಅಧ್ಯಾಯ 12

 ಮನುಷ್ಯರಲ್ಲದೆ ಪ್ರತಿಯೊಂದು ಪ್ರಾಣಿ ಪಕ್ಷಿಗಳಲ್ಲೂ

ಭಾವನೆಗಳಿಗೆ ಸ್ಪಂದಿಸುವ ಮುಗ್ಧ ಮನಸ್ಸಿದೆ.

ಪ್ರೀತಿಯ ಪರಿಭಾಷೆಗೆ ಪ್ರತಿಕ್ರಿಯೆ ನೀಡದ 

ಆತ್ಮವಿಲ್ಲ ಜಗದಲ್ಲಿ.

ಅರ್ಥ ಮಾಡಿಕೊಳ್ಳುವ ಮನಸ್ಸು ಮತ್ತು ತಾಳ್ಮೆ

ಇರಬೇಕಷ್ಟೆ.




Saturday, August 1, 2020

ಅಮೃತ ಸಿಂಚನ - ಅಧ್ಯಾಯ 11

ನಮ್ಮ ಮುಂದಿನ ಪೀಳಿಗೆಗೆ
ಹಣ ಆಸ್ತಿ ಕೂಡಿಟ್ಟರೆ
ಭವಿಷ್ಯದಲ್ಲಿ ಸುಖ ಜೀವನ ನಿಖರವಲ್ಲ
ಅದೇ ಶ್ರಮದಿ ದುಡಿಯುವ
ಸಂಸ್ಕಾರ ನೀಡಿದರೆ
ನಮ್ಮ ಅಗಳಿಕೆಯ ನಂತರವೂ
ನೆಮ್ಮದಿಯಿಂದಿರುವುದು ಖಂಡಿತ
ಏಕೆಂದರೆ ಕೂತು ಉಂಡರೆ
ಕುಡಿಕೆ ಹೊಣ್ಣು ಸಾಲದು
                 - ಒಂದೊಳ್ಳೆ ಮಾತು

ಅಮೃತ ಸಿಂಚನ - ಅಧ್ಯಾಯ 10

ಪ್ರೀತಿಯ ನಿಜವಾದ ಅರ್ಥ
ಪ್ರೀತಿಯನ್ನು ಗಳಿಸುವುದಲ್ಲಾ
ಪ್ರೀತಿಯನ್ನು ಹಂಚುವುದು
ಇಲ್ಲಿ ಅನುಮಾನಕ್ಕೆ, ಅಧಿಕಾರಕ್ಕೆ ಜಾಗವಿಲ್ಲ
ವಿಶ್ವಾಸ ಮತ್ತು ನಂಬಿಕೆಯ
ಭದ್ರ ಬುನಾದಿ.............
                        -  ಒಂದೊಳ್ಳೆ ಮಾತು

ಅಮೃತ ಸಿಂಚನ - ಅಧ್ಯಾಯ 9

ಸಿರಿ ಬಡವನಾದರೂ
ನಾ ನಿನ್ನ ಸ್ವೀಕರಿಸುವೆನು
ಗುಣವೇ ಸಿರಿತನವಯ್ಯ
ಗುಣ ಬಡವನಾದರೆ
ನಾ ಹೇಗೆ ಸ್ವೀಕರಿಸಲಿ
ಆತ್ಮ ಸೌಂದರ್ಯವೇ ಶಾಶ್ವತವಯ್ಯ
                        - ಒಂದೊಳ್ಳೆ ಮಾತು

ಅಮೃತ ಸಿಂಚನ - ಅಧ್ಯಾಯ 8

ಶ್ರಮದಿ ಮೇಲೇರುತ್ತಿರುವವರನ್ನು
ಕೆಳೆಗೆಳೆಯುವ ಪ್ರಯತ್ನ
ಸಾಮಾನ್ಯವಾಗಿ ಯಾರೂ ಮಾಡಬಹುದು
ಅದೇ ತಾನೂ ಶ್ರಮದಿ ಮೇಲೇರಿ
ಮತ್ತೊಬ್ಬರನ್ನು ಮೇಲೆತ್ತುವ ಅದ್ಭುತ ಕೆಲಸ
ಕೇವಲ ಸ್ವಚ್ಛ ಮನಸ್ಸಿನಿಂದ ಸಾಧ್ಯ
ಇಂಥ ಅಸಾಮಾನ್ಯ ಕೆಲಸ ಒಮ್ಮೆ ಮಾಡಿ
ಆತ್ಮ ಸಂತೃಪ್ತಿ ದೊರಕುವುದು
                      - ಒಂದೊಳ್ಳೆ  ಮಾತು
                          

ಅಮೃತ ಸಿಂಚನ - ಅಧ್ಯಾಯ 7

ಸಾವನ್ನು ಗೆದ್ದವರು
ಮೃತ್ಯುಂಜಯರಾದರೆ
ಮನಸ್ಸುಗಳನ್ನು ಗೆಲ್ಲುವವರು
ಸಾವಿನ ನಂತರವೂ ಅಜಾರಾಮರ
ಇತರರನ್ನು ಬಲದಿಂದ ಗೆಲ್ಲುವವರು
ಶಕ್ತಿ ಶಾಲಿಯಾದರೆ
ಎಲ್ಲರನ್ನು ಪ್ರೀತಿ-ವಿಶ್ವಾಸದಿಂದ ಗೆಲ್ಲುವವರೇ
ಸರ್ವ ಶಕ್ತರು
                         - ಒಂದೊಳ್ಳೆ ಮಾತು

ಅಮೃತ ಸಿಂಚನ- ಅಧ್ಯಾಯ 6

ಭುವಿಯನ್ನೇ ಸೃಷ್ಟಿಸಿರುವ ಭಗವಂತನಿಗೆ
ನಾನೇನನ್ನು ನೀಡಿ ಸಂತೃಪ್ತಿಗೊಳಿಸಲು ಸಾಧ್ಯ?
ಎಲ್ಲಾ ಸಂಪತ್ತನ್ನು ಆತನೇ ಭಿಕ್ಷೆ ನೀಡಿರುವಾಗ
ನನ್ನಿಂದ ಏನಾದರೂ ಬಯಸಲು ಹೇಗೆ ಸಾಧ್ಯ?
ಆತ ಬಯಸುವುದೊಂದೇ ನಿಷ್ಕಲ್ಮಶ ಭಕ್ತಿ
ಎಲ್ಲರ ಹೃದಯದಲ್ಲೂ ದೇವರಿದ್ದಾರೆ
ನೊಂದ ಹೃದಯಗಳಿಗೆ ಸ್ಪಂದಿಸುವುದೇ
ಭಕ್ತಿ ಮತ್ತು ಪ್ರೀತಿಯ ಮೊದಲ ಹೆಜ್ಜೆ
ದೇಹವೇ ದೇಗುಲ
                         - ಒಂದೊಳ್ಳೆ ಮಾತು


ಅಮೃತ ಸಿಂಚನ - ಅಧ್ಯಾಯ 5

ಸತತವಾಗಿ ಉಳಿ ಏಟು ತಿಂದ ಮೇಲೆ
ಶಿಲೆಯು ಪರಂಪವಿತ್ರ ಮೂರ್ತಿಯಾಗಿ
ಗರ್ಭಗುಡಿಯನ್ನಲಂಕರಿಸುವುದು
ಉಷ್ಣತೆಯ ಕುಲುಮೆಯಲ್ಲಿ ಬೆಂದ ಮೇಲೆಯೇ
ಚಿನ್ನದ ಅದಿರು ಅಪ್ಪಟ ಬಂಗಾರವಾಗುವುದು
ಹಾಗೆಯೇ ವಿಧಿಯ ನೋವಿನ ಕುಲುಮೆಯಲ್ಲಿ
ಬೆಂದ ಆತ್ಮವು ಮಾತ್ರ ಮಾನವೀಯತೆಯ ಮೂರ್ತಿಯಾಗಿ
ಎಲ್ಲರನ್ನೂ ಆದರಿಸುವ ಪರಮಾತ್ಮವಾಗುವುದು
                                               - ಒಂದೊಳ್ಳೆ ಮಾತು

ಅಮೃತ ಸಿಂಚನ - ಅಧ್ಯಾಯ 1

ಧಾನ್ಯದ ಬೀಜ ಬಿತ್ತಿದರೆ
ಮೂರು ವರುಷದ ಫಲ 
ಹಣ್ಣಿನ ಬೀಜ ಬಿತ್ತಿದರೆ 
ನೂರು ವರುಷದ ಫಲ
ವಿದ್ಯೆಯ ಬೀಜ ಬಿತ್ತಿದರೆ 
ಸಾವಿರಾರು ವರುಷದ ಫಲ
ಜ್ಞಾನ ಯಾರೂ ಕದಿಯಲಾರದ
ಸಂಪತ್ತಿನ ಕಣಜ
           - ಒಂದೊಳ್ಳೆ ಮಾತು

ಅಮೃತ ಸಿಂಚನ - ಅಧ್ಯಾಯ 4

ಸಾಧಕರಿಗೆ ಯಶಸ್ಸು
ಎಂದಿಗೂ ಅಂತಿಮವಲ್ಲ
ಸೋಲು ಎಂದಿಗೂ ಕೊನೆಯಲ್ಲ
ಸೋಲಿನ ಏಟಿಗೆ ಸೋತರೆ
ಯಶಸ್ಸು ಕೇವಲ ಕನಸಷ್ಟೆ
ಎಲ್ಲಾ ಸಾಧಕರ ಯಶಸ್ಸಿನ ಹಿಂದೆ
ಸೋಲಿನ- ನೋವಿನ ಸರಮಾಲೆಗಳಿವೆ
ಸತತ ಪ್ರಯತ್ನವೇ
ಗೆಲುವಿನ ಹೆಬ್ಬಾಗಿಲಿನ ಕೀಲಿಗೈ
                         - ಒಂದೊಳ್ಳೆ ಮಾತು

Thursday, July 30, 2020

ಅಮೃತ ಸಿಂಚನ - ಅಧ್ಯಾಯ 3

ವ್ಯಕ್ತಿಯನ್ನು ಯಶಸ್ಸಿನ ಶಿಖರಕ್ಕೇರಿಸುವ,
ಅಥವಾ ನೋವಿನ ಪಾತಾಳಕ್ಕೆ ನೂಕುವ
ಎರಡೂ ಸಾಮರ್ಥ್ಯ ಸ್ನೇಹಕ್ಕಿದೆ
ಸ್ನೇಹ ಸಂಬಂಧವನ್ನು ಚಿರಕಾಲ ಉಳಿಸುವ
ಜವಾಬ್ದಾರಿ ನಮ್ಮ ಕೈಯಲ್ಲಿದೆ
ಸ್ನೇಹದ ಪರಿಚಯ ಸಮಯಾಧಾರಿತವಾದರೆ
ಸ್ನೇಹ ಸಂಬಂಧದ ನಿಶ್ಚಲತೆ ಗುಣಾಧಾರಿತವಾಗಿದೆ
ಹೃದಯ ಸೌಂದರ್ಯದ ತಳಹದಿಯ ಮೇಲೆ
ರಕ್ತ ಸಂಬಂಧ ಮೀರಿ ಬೆಳೆಯುವ
ಪವಿತ್ರ ಬೆಸುಗೆಯಿದು ಸ್ನೇಹ
ಸಂಕಷ್ಟದಲ್ಲಿ ಹೆಗಲು ನೀಡುವ
ದುಃಖದಲ್ಲಿ ಕಂಬನಿ ಒರೆಸುವ
ನಮ್ಮ ನಗುವಿನೊಳಗೆ ಮುಗುಳ್ನಗುವ
ಅವಿನಾಭಾವ ಸಂಬಂಧದ ಹೆಸರೇ ಸ್ನೇಹ
                                      - ಒಂದೊಳ್ಳೆ ಮಾತು




Wednesday, July 29, 2020

ಅಮೃತ ಸಿಂಚನ - ಅಧ್ಯಾಯ 2

ಕಷ್ಟ ಕಾಲದಲ್ಲಿ ನಮ್ಮನ್ನು
ಯಾರಾದರೂ ನೆನೆಯುತ್ತಾರೆ ಎಂದರೆ
ಅವರ ದೃಷ್ಟಿಯಲ್ಲಿ ನಾವು
ಭರವಸೆಯ ಅಂತಿಮ ಬೆಳಕು
ಸಂಕಷ್ಟದಲ್ಲಿ ನೊಂದ ಮನಸ್ಸಿನೊಂದಿಗೆ
ನಾವು ಸ್ಪಂದಿಸುತ್ತೇವೆಯೆಂದರೆ
ನಮ್ಮನ್ನು ನಾವೇ ಸುಟ್ಟುಕೊಂಡು
ನಿಸ್ವಾರ್ಥದಿಂದ ಬೆಳಗುವ ಹಣತೆ
ಮತ್ತೊಬ್ಬರ ಪಾಲಿಗೆ ಬೆಳಕಾಗುವ
ಅವಕಾಶ ಎಲ್ಲರಿಗೂ ದೊರೆಯದು
                         - ಒಂದೊಳ್ಳೆ ಮಾತು



Sunday, July 26, 2020

ಭಾವನಾಲೋಕ

ಭಾವನಾಲೋಕದಲ್ಲಿ
ಮಾತಿಂದು ಗೌನ
ಮನಸ್ಸಿನಾಳದಲ್ಲಿ
ಆವರಿಸಿದೆ ಮೌನ

ಕಲ್ಪನಾಲೋಕದಲ್ಲಿ
ಮೂಡಿರುವ ಬಿಂಬ
ಮರೆಯಾದೆ ವಾಸ್ತವದಲ್ಲಿ
ನಾನಾದೆ ಕಲ್ಪನೆಯ ಪ್ರತಿಬಿಂಬ

ಸುಪ್ತ ಮನಸ್ಸಿನಲ್ಲಿ
ನಿನ್ನದೇ ಮೊಹರು
ಸೊಗಸಾದ ಕನಸಿನಲ್ಲಿ
ನೀ ಸುಳಿದ ಕುರುಹು

ಕವಿ ಕಲ್ಪನೆ ಮೀರಿದ
ಕಾವ್ಯ ನೀನು
ರವಿ ಕಲ್ಪನೆ ಮೀರಿದ
ಸೃಷ್ಟಿ ನೀನು

- ಬರಹಗಾರರ ಕಾಲ್ಪನಿಕ ಸಾಲುಗಳು ಮಾತ್ರ

ಜೀವ ಮಿಡಿಯುತಿದೆ....

ಕಣ್ಣ ನೋಟದಲ್ಲೇ
ನನ್ನ ಸೆಳೆದ ಕಣ್ಣು
ಮೌನ ಗೀತೆಯಲ್ಲೇ
ನನ್ನ ಕರೆದ ಹೆಣ್ಣು
ಕನಸಿನೊಳಗೆ ಅವಳ ಹೆಜ್ಜೆ
ಮನಸಿನೊಳಗೆ ಏನೋ ಲಜ್ಜೆ
ಜೀವ ಮಿಡಿಯುತಿದೆ..........

ಜನುಮ ಜನುಮದಲ್ಲಿ
ನನ್ನ ಜೀವ ನೀನು
ನಿನ್ನೆಲ್ಲಾ ನೋವಿನಲ್ಲಿ 
ಪಾಲುದಾರ ನಾನು
ಪ್ರೀತಿ ಹೃದಯ ಬಳಿಗೆ ಬರಲು
ಭಾವನೆಗಳ ಹೊತ್ತು ತರಲು
ಜೀವಮಿಡಿಯುತಿದೆ...........

 - ಬರಹಗಾರರ ಕಾಲ್ಪನಿಕ ಸಾಲುಗಳು ಮಾತ್ರ

ಮನ್ವಂತರ

ಕನಸಿನ ಕಣ್ಣಿಗೆ
ಪ್ರೇಮದ ಕಾಡಿಗೆ
ಹೃದಯದ ಭೇಟಿಗೆ
ನಂಬಿಕೆಯೇ ದೀವಿಗೆ

ಸ್ವಾರ್ಥ ಭಾವ ದಾಟಿ
ಮನಸ್ಸು-ಮನಸ ಭೇಟಿ
ಮನ್ವಂತರ ಮೀಟಿ
ನಿಷ್ಕಲ್ಮಶ ಭಾವ ಪ್ರೀತಿ

- ಬರಹಗಾರರ ಕಾಲ್ಪನಿಕ ಸಾಲುಗಳು


Saturday, July 25, 2020

ಸ್ನೇಹ

💖ಸ್ನೇಹವೆಂಬ ಭಾವವು
 ಮನದಂಗಳದಿ ಅರಳಲು
 ಒಬ್ಬಂಟಿಯ ನೋವು
ಮಂಜಿನ ಹನಿಯಂತೆ ಕರಗಲು

 ಕೋಪದೊಳಗಿನ ಪ್ರೀತಿಯ ಆಳ
 ನಗುವಿನೊಳಗಿನ ನೋವಿನ ಕಡಲ
 ಮೌನದೊಳಗಿನ ಮಾತಿನ ಹೊನಲ
 ಅರಿಯುವ ಶಕ್ತಿ ನೀ ಸ್ನೇಹ

 ರಕ್ತ ಸಂಬಂಧವ ಮೀರಿದುದು
 ನಿಸ್ವಾರ್ಥ ಭಾವದ ಕಡಲಿದು 
ಸಾಂತ್ವನದ ಚಿಲುಮೆಯಿದು
 ಅತ್ಯಮೂಲ್ಯ ಸಂಪತ್ತಿದುವೇ ಸ್ನೇಹ

 ಮೇಲು ಕೀಳೆಂಬ ಭಾವವಿರದು
 ಗಂಡು ಹೆಣ್ಣೆಂಬ ಭೇದವಿರದು
 ವಯಸ್ಸಿನ ಅಂತರವಿರದು
ಎಲ್ಲರನ್ನೂ ಆದರಿಸುವುದೀ ಸ್ನೇಹ💛

 Real Friendship is the one which always supports you in your ups and downs of your life. We can analyze the strength of any relationship, how it will support when we are really struggling to get rid of our problems. Friend in need is a friend indeed👭

Wednesday, May 20, 2020

🌹ನಿಮಗಿದೋ ನಮ್ಮ ಕೋಟಿ ನಮನ🌹

ಕಾರ್ಗತ್ತಲು ಕವಿದಿದೆ ಮನವ 
ಮಹಮಾರಿಯು ಮುತ್ತಿದೆ ಜಗವ
ಕ್ಷಣ ಕ್ಷಣಕ್ಕೂ ಭಯದ ನೆರಳು 
ಜನ ಮನದಲ್ಲಿ ಕಳವಳ ತರಲು😷

ದುಡಿಯುವ ಕೈಗಳಿಗಿಂದು 
ವೈರಸ್ ಹಾಕಿದೆ ಬೇಡಿ
ಆರ್ಥಿಕತೆಯ ಬುನಾದಿಯಿಂದು 
ಬುಡಮೇಲಾಗಿದೆ ನೋಡಿ😷

ಮನುಜನ ಕ್ರೌರ್ಯದ ಪಾಪ
ಸೃಷ್ಟಿಸಿದೆ ಮೃತ್ಯುವಿನ ಕೂಪ
ಪ್ರಕೃತಿ ನೀಡಿದ ಶಾಪ
ಸಹಿಸಲಾಗದೀ ವಿಕೋಪ😷

ದೇಹವೇ ದೇಗುಲವೆಂಬ
ಬಸವಣ್ಣನ ಮಾತು ಸತ್ಯ
ಆಡಂಬರವೇ ಜೀವನವೆಂಬ
ಗತ ಕಾಲ ಇಂದು ಮಿಥ್ಯ😷

ಕಾಂಚಾಣದ ಅಮಲಿನಿಂದ
ಸರಳ ಜೀವನದೆಡೆ ನಮ್ಮ ಪಯಣ
ಆಧುನಿಕತೆಯ ಮಂಪರಿನಿಂದ 
ಮಾನವೀಯತೆಯೆಡೆಗೆ ನಮ್ಮ ಗಮನ😷

ಕೊರೋನ ರೋಗದ ನಿಗ್ರಹ 
ಮಾಸ್ಕ್-ಸಾಮಾಜಿಕ ಅಂತರವೇ ಮದ್ದು
ನಮ್ಮ ರಕ್ಷಣ ತಾಣವೇ ಸ್ವಗೃಹ 
ಗುಂಪುಗಾರಿಕೆಗೆ ಸ್ವಯಂ ಹೇಳಿ ರದ್ದು😷

ಸ್ವಾರ್ಥ ತುಂಬಿದ ಜನರ ನಡುವೆ 
ನಿಸ್ವಾರ್ಥದ ಮನಗಳು ಹಲವು
ಜೀವದ ಹಂಗನು ತೊರೆಯೆ 
ನಿಮ್ಮ ಸೇವೆಗೆ ನಾವು ಶರಣು🙏

ಹಗಳಿರುಳೆನ್ನದ ಕಾಯಕದಿಂದ
ಬೆಳಗಿದೆ ಜನರ ಜೀವ - ಜೀವನ
ನಮ್ಮೆಲ್ಲರ ಹೃದಯಾಳದಿಂದ
ನಿಮಗಿದೋ ನಮ್ಮ ಕೋಟಿ ನಮನ🙏👏

ಸಂಘಜೀವಿಗಳಾದ ಮನುಜ ಕುಲಕ್ಕೆ ಬಂದೊದಗಿದ ಸಂಕಷ್ಟವನ್ನು ಎದುರಿಸುವುದು ಕಷ್ಟವಾದರೂ ಅನಿವಾರ್ಯ. ನಮ್ಮಿಂದಾಗುವ ಕನಿಷ್ಟ ಸಹಾಯವೆಂದರೆ ಸ್ವಯಂ ಜಾಗೃತಿಗೊಂಡು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಅದುವೇ ನಮಗಾಗಿ ಶ್ರಮಿಸುವ ವರ್ಗಕ್ಕೆ ನಾವು ಮಾಡುವ ಅರ್ಥಗರ್ಭಿತವಾದ ಅಭಿನಂದನೆ. ಬರಹದ ಮೂಲಕ ಜನ ಜಾಗೃತಿ ಮೂಡಿಸುವ ಸಣ್ಣ ಪ್ರಯತ್ನವಿದು. 


  1. " To protect our wealth we will take different precautionary measures. Even for a single rupee loss we will bother a lot. But health is the real wealth. Why we can't wear atleast a mask and maintain social distance untill the deadly virus is completely eradicated? Please think of it"😷







Monday, May 18, 2020

ವಿಧಿ ಲಿಖಿತ✒

📝

ವಿಧಿ ಲಿಖಿತ 
ಬಲು ಖಚಿತ 
ಬದಲಾವಣೆ ಅನಿಶ್ಚಿತ 
ಪಾಲಿಗೆ ಬಂದದ್ದು ಪಂಚಾಮೃತ✒ 

ಏನ ಬಯಸಿ ಬಂದೆ ನಾನು
ಏನ ಗಳಿಸಿ ಹೋಗುವೆ ನಾನು
ಹುಟ್ಟು ಸಾವಿನ ಮಧ್ಯೆ ಇನ್ನು
ಮೂರು ದಿನದ ಬಾಳು ಏನು?✒

ಮೂರು ದಿನದಿ ನೂರು ಕನಸು
ನೂರು ಕನಸಲ್ಲಿ ನನಸು ಎಷ್ಟೋ?
ಚಿಂತೆ-ಚಿತೆಯೂ ಸಮಾಸಮವು 
ಶೂನ್ಯವೊಂದೇ ವ್ಯತ್ಯಾಸವು✒

ಬದುಕಿನ ಪುಟದಲ್ಲಿ ಎಲ್ಲಾ ಗೋಳು
ಗೋಳು ಎನ್ನದೆ ಬದುಕಿ ಬಾಳು
ಬ್ರಹ್ಮ ಗೀಚಿದ ಬರಹವಿದು
ಯಾರಿಂದಲೂ ಅಳಿಸಲಾಗದು✒

ಕಾಲದ ಕರೆಗೆ ಓ ಎಂದಾಗ
ಎಲ್ಲಾ ತೊರೆದು ಸಾಗು ನೀನು
ಆತ್ಮ ಪರಮಾತ್ಮನ ಪಾಲು
ಕಾಯ ಮಣ್ಣಿನ ಪಾಲು✒

  
The purpose behind every birth, to whom we will meet, who will stay in our life and ups and downs of life till our death everything are pre decided by God before sending every creature to this earth. We have no control over these, just following his instructions. So only thing left to us is "accept the life as it is". Expectations will hurt more when it is not going according to our wish.✒☺






Saturday, May 9, 2020

💜💖 ಅಮ್ಮ💚💛

💗ಪದಗಳೇ ನಿಲುಕದು 💚
💗ನಿಮ್ಮ ಬಣ್ಣಿಸಲು💚
💗ಜನುಮವೇ ಸಾಲದು 💚
💗ಋಣವ ತೀರಿಸಲು 💚

                 💖ತೊದಲ ನುಡಿಯ ಮಾತಂದು 💜
                💖 ನಿಮ್ಮ ಬಳಿಗೆ ಕರೆಯಲು💜
                💖 ಅಂಬೆಗಾಲ ನಡಿಗೆಗೆಂದು 💜
                💖 ತುದಿ ಬೆರಳು ಹಿಡಿಯಲು💜

💕ಕೈ ತುತ್ತು ಸವಿಯದು 💛
💕ಸಾಧ್ಯವೇ ಮರೆಯಲು 💛
💕ಬಿಗಿದಪ್ಪಿದ ಮಡಿಲದು💛
💕ಅಳುವ ಕಂದನ ಆಲಂಗಿಸಲು 💛

                 💝ನೋವ ಸಹಿಸಿ ಇತ್ತ ಜನುಮವಿದು❤
                💝 ನಿಸ್ವಾರ್ಥ ಪ್ರೀತಿಯ ಕಡಲು❤
                 💝ಸೃಷ್ಟಿಯ ಅದ್ಭುತ ವರವಿದು❤
                💝 ಅಮ್ಮ ಎಂಬ ತ್ಯಾಗ ಮೂರ್ತಿಯು❤💞
💟  Mother is the one who can take the place of all others but whose place no one else can take in our life💓 She is the one with whom we will argue a lot and quarrel the most but she is the one who loves and cares us the most in this world💛 Mother's love will never end💚 The best place to cry is on a mother's arms and lap💜 When we look into our mother's eyes, we will come to know that, her's is the purest love we can find on this earth❤



Thursday, May 7, 2020

ನಗು


ನಗುವೇ ನನ್ನ ಮರೆಯದಿರು.     
ನಗುವೇ ನನ್ನ ತೊರೆಯದಿರು
ಕಣ್ಣಂಚಲಿ ನೋವಿದ್ದರೂ
ತುಟಿಯಂಚಲಿ ನೀನಿರು

                ಜಗವ ಗೆಲ್ಲುವ ಶಕ್ತಿ
                ನಗುವಿನೊಳಗಿನ ಕಾಂತಿ
                ನೋವ ಮರೆಸುವ ಯುಕ್ತಿ
                ಮುಗುಳ್ನಗೆಯ ಪಂಕ್ತಿ

ದುಗುಡ ನನ್ನ ಕರೆಯದಿರು
ದುನ್ಮಾನ ಬಳಿಗೆ ಸುಳಿಯದಿರು
ಚಿಂತೆಯ ಸುಳಿವಿದ್ದರೂ
ತುಟಿಯಂಚಲಿ ನೀನಿರು

                  ಸುಪ್ತ  ಮನಸ್ಸಿನ ಒಡಲು
                  ಸಪ್ತ ಸಾಗರದ ಕಡಲು
                  ಪ್ರೀತಿ ತುಂಬಿದ ಹೊನಲು
                  ಬಣ್ಣದಿ ನಗುವ ಕಾಮನಬಿಲ್ಲು
Pure smile is the way of expressing happiness of inner spirit. It has the power to console you and spreads happiness around you. Smile it is a free therapy. Peace begins with a smile. ☺😁

Friday, March 27, 2020

ಭಾವಾಮೃತ ಬಿಂದು

ಭಾವದ ಈ ಸೆಲೆ
ಭಾವಾಂತರಂಗವ ಮೀಟಿದೆ
ಕನಸಿನ ಕಣ್ ರೆಪ್ಪೆಗೆ
ಕಣ್ಣ ಹನಿಯು ಮುತ್ತಿಕ್ಕಿದೆ

ಕಾಣದ ಕಡಲಿಗೆ
ಮನವೇಕೋ ಹಾತೊರೆದಿದೆ
ಗಗನದ ಬಿಳಿ ಚುಕ್ಕಿಗೆ
ಮನವಿಂದೇಕೋ ಮರುಳಾಗಿದೆ

ಸಾವಿರ ಕನಸುಗಳು
ಸ್ಮೃತಿ ಪಟಲವ ಮುತ್ತಿದೆ
ವಾಸ್ತವಕ್ಕೆ ಬರಲಿಂದು
ಗೊಂದಲವು ಹೆಡೆಬಿಚ್ಚಿದೆ

ಸಾಗಿ ಬರುವ ಹಾದಿ
ಸಾಗರೋಪಾದಿ
ಬಾಳ ಪಯಣವಿದು
ಎಂದು ಮುಗಿಯದ ಅಧ್ಯಾಯ

ಕಷ್ಟ ಸುಖದ ಈ ತೇರು
ಎಳೆಯಲೇಬೇಕು ನೀನೂ
ಒಬ್ಬಂಟಿಯಾದರೂನೂ
ಧೃತಿಗೆಡದಿರೂ ಎಂದೂ

ಮನವ ಕದವ ತಟ್ಟಿದೆ
ಬಗೆಹರಿಯದ ನೂರು ಪ್ರಶ್ನೆಗಳು
ಭಾವ ಸುಳಿಯ ಸೃಷ್ಟಿಸಿದೆ
ಮನದಾಳದ ಹುಸಿ ಬಯಕೆಗಳು

ಈ ಮನದ ಸುಪ್ತ ಬಂಧುವೇ
ನೀನೊಮ್ಮೆ ಬಳಿಗೆ ಬಂದು
ಈ ಬಾಳ ಅಮೃತ ಬಿಂದುವೇ
ನೀ ಬೆಳಗೂ ಮನವ ಇಂದು

ಬೆಳಗೂ ಮನವ ಇಂದು
ಓ ಭಾವಾಮೃತದ ಬಿಂದು
ಬೆಳಗೂ ಮನವ ಇಂದು
ಓ ಭಾವಾಮೃತದ ಬಿಂದೂsss

- In search of a very good friend hiding inside ourself that is the positive energy. That will give you the confidence to overcome all the obstacles in life.