Sunday, August 30, 2020

ಅಮೃತ ಸಿಂಚನ - ಅಧ್ಯಾಯ 14

 ಗೆಲುವು ಆತ್ಮ ಸಂತೃಪ್ತಿ ಹುಟ್ಟಿಸಬೇಕೇ

ಹೊರತು ಅಹಂಕಾರವನ್ನಲ್ಲ.

ಸೋಲು ಆತ್ಮ ಸ್ಥೈರ್ಯ ಹೆಚ್ಚಿಸಬೇಕೇ 

ಹೊರತು ನಕಾರಾತ್ಮಕ ಯೋಚನೆಗಳನ್ನಲ್ಲ.

ಅಮೃತ ಸಿಂಚನ - ಅಧ್ಯಾಯ 13

 ನಮ್ಮ ಬದುಕಲ್ಲಿ ಪ್ರವೇಶ ಬಯಸುವ

ಪ್ರತಿಯೊಂದು ವಸ್ತು ಅಥವಾ ವ್ಯಕ್ತಿಯನ್ನು

ಕಾಲವೇ ನಿರ್ಧರಿಸುವುದು.

ಆದರೆ ಮನಸ್ಸಿಗೆ ಎಷ್ಟು ಹಿತವರೆಂಬುದನ್ನು

ಗುಣ ಮತ್ತು ಸ್ವಭಾವ ನಿರ್ಧರಿಸುವುದು



ಅಮೃತ ಸಿಂಚನ - ಅಧ್ಯಾಯ 12

 ಮನುಷ್ಯರಲ್ಲದೆ ಪ್ರತಿಯೊಂದು ಪ್ರಾಣಿ ಪಕ್ಷಿಗಳಲ್ಲೂ

ಭಾವನೆಗಳಿಗೆ ಸ್ಪಂದಿಸುವ ಮುಗ್ಧ ಮನಸ್ಸಿದೆ.

ಪ್ರೀತಿಯ ಪರಿಭಾಷೆಗೆ ಪ್ರತಿಕ್ರಿಯೆ ನೀಡದ 

ಆತ್ಮವಿಲ್ಲ ಜಗದಲ್ಲಿ.

ಅರ್ಥ ಮಾಡಿಕೊಳ್ಳುವ ಮನಸ್ಸು ಮತ್ತು ತಾಳ್ಮೆ

ಇರಬೇಕಷ್ಟೆ.




Saturday, August 1, 2020

ಅಮೃತ ಸಿಂಚನ - ಅಧ್ಯಾಯ 11

ನಮ್ಮ ಮುಂದಿನ ಪೀಳಿಗೆಗೆ
ಹಣ ಆಸ್ತಿ ಕೂಡಿಟ್ಟರೆ
ಭವಿಷ್ಯದಲ್ಲಿ ಸುಖ ಜೀವನ ನಿಖರವಲ್ಲ
ಅದೇ ಶ್ರಮದಿ ದುಡಿಯುವ
ಸಂಸ್ಕಾರ ನೀಡಿದರೆ
ನಮ್ಮ ಅಗಳಿಕೆಯ ನಂತರವೂ
ನೆಮ್ಮದಿಯಿಂದಿರುವುದು ಖಂಡಿತ
ಏಕೆಂದರೆ ಕೂತು ಉಂಡರೆ
ಕುಡಿಕೆ ಹೊಣ್ಣು ಸಾಲದು
                 - ಒಂದೊಳ್ಳೆ ಮಾತು

ಅಮೃತ ಸಿಂಚನ - ಅಧ್ಯಾಯ 10

ಪ್ರೀತಿಯ ನಿಜವಾದ ಅರ್ಥ
ಪ್ರೀತಿಯನ್ನು ಗಳಿಸುವುದಲ್ಲಾ
ಪ್ರೀತಿಯನ್ನು ಹಂಚುವುದು
ಇಲ್ಲಿ ಅನುಮಾನಕ್ಕೆ, ಅಧಿಕಾರಕ್ಕೆ ಜಾಗವಿಲ್ಲ
ವಿಶ್ವಾಸ ಮತ್ತು ನಂಬಿಕೆಯ
ಭದ್ರ ಬುನಾದಿ.............
                        -  ಒಂದೊಳ್ಳೆ ಮಾತು

ಅಮೃತ ಸಿಂಚನ - ಅಧ್ಯಾಯ 9

ಸಿರಿ ಬಡವನಾದರೂ
ನಾ ನಿನ್ನ ಸ್ವೀಕರಿಸುವೆನು
ಗುಣವೇ ಸಿರಿತನವಯ್ಯ
ಗುಣ ಬಡವನಾದರೆ
ನಾ ಹೇಗೆ ಸ್ವೀಕರಿಸಲಿ
ಆತ್ಮ ಸೌಂದರ್ಯವೇ ಶಾಶ್ವತವಯ್ಯ
                        - ಒಂದೊಳ್ಳೆ ಮಾತು

ಅಮೃತ ಸಿಂಚನ - ಅಧ್ಯಾಯ 8

ಶ್ರಮದಿ ಮೇಲೇರುತ್ತಿರುವವರನ್ನು
ಕೆಳೆಗೆಳೆಯುವ ಪ್ರಯತ್ನ
ಸಾಮಾನ್ಯವಾಗಿ ಯಾರೂ ಮಾಡಬಹುದು
ಅದೇ ತಾನೂ ಶ್ರಮದಿ ಮೇಲೇರಿ
ಮತ್ತೊಬ್ಬರನ್ನು ಮೇಲೆತ್ತುವ ಅದ್ಭುತ ಕೆಲಸ
ಕೇವಲ ಸ್ವಚ್ಛ ಮನಸ್ಸಿನಿಂದ ಸಾಧ್ಯ
ಇಂಥ ಅಸಾಮಾನ್ಯ ಕೆಲಸ ಒಮ್ಮೆ ಮಾಡಿ
ಆತ್ಮ ಸಂತೃಪ್ತಿ ದೊರಕುವುದು
                      - ಒಂದೊಳ್ಳೆ  ಮಾತು